ಬಿ. ಸಿ ರೋಡ್: ಲಾವಣ್ಯ ಹತ್ಯೆ ಪ್ರಕರಣ – ಗೃಹ ಸಚಿವರು ಇನ್ನಾದರೂ ಮೈಚಳಿ ಬಿಟ್ಟು ಕಾರ್ಯೋನ್ಮುಖವಾಗಲಿ : ಶಾಸಕ ವೇದವ್ಯಾಸ್ ಕಾಮತ್

Prakhara News
1 Min Read

ಬಂಟ್ವಾಳ: ಬಂಟ್ವಾಳದಲ್ಲಿ ಲಾವಣ್ಯ ಎಂಬ ಯುವತಿಯ ಬರ್ಬರ ಹತ್ಯೆ, ಮತ್ತೊಂದು ಪ್ರಕರಣದಲ್ಲಿ ಯುವತಿಯೊಬ್ಬಳ ಮೇಲೆ ಮಾರಣಾಂತಿಕ ಚೂರಿ ಇರಿತ ಘಟನೆಗಳು ರಾಜ್ಯದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಧೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದರ ಸತ್ಯ ದರ್ಶನವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಕಳವಳ ವ್ಯಕ್ತಪಡಿಸಿದರು.

ಆರೋಪಿಗಳಿಗೆ ಕಾನೂನಿನ ಯಾವುದೇ ಭಯವಿಲ್ಲದೇ ಹಾಡಹಗಲೇ ಮುಗ್ಧ ಜೀವಗಳನ್ನು ಬಲಿ ಪಡೆಯುವ ಧೈರ್ಯ ಬರಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯ ಆಡಳಿತ ವ್ಯವಸ್ಥೆಯೇ ಕಾರಣ. ಬದುಕಿನಲ್ಲಿ ಅನೇಕ ಕನಸುಗಳನ್ನು ಕಂಡು, ಬಾಳಿ ಬದುಕಬೇಕಿದ್ದ ಯುವತಿಯ ಅಮಾನುಷ ಹತ್ಯೆಗೈದ ಆರೋಪಿಯನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು.

ಆತನಿಗೆ ಅತ್ಯಂತ ಕಠಿಣ ಶಿಕ್ಷೆಯಾಗುವ ಮೂಲಕ ಹೆಣ್ಣುಮಕ್ಕಳಿಗೆ ನಿರ್ಭೀತ ವಾತಾವರಣ ಸೃಷ್ಟಿಯಾಗಬೇಕು. ಆ ನಿಟ್ಟಿನಲ್ಲಿ ರಾಜ್ಯದ ಗೃಹ ಸಚಿವರು ಇನ್ನಾದರೂ ಮೈಚಳಿ ಬಿಟ್ಟು ಕಾರ್ಯೋನ್ಮುಖವಾಗಲಿ ಎಂದು ಶಾಸಕರು ಆಗ್ರಹಿಸಿದರು.

Share This Article
Leave a Comment