ಬೆಳ್ತಂಗಡಿ: ಸೌಜನ್ಯ ಅವರ ತಾಯಿ ಕುಸುಮಾವತಿ ಮತ್ತು ಸೌಜನ್ಯ ಪರ ಹೋರಾಟಗಾರರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿದೆ.


‘ಶುಭಾ ರೈ, ಯಶವಂತ ಗಟ್ಟಿ, ದೀಪಕ್ ಶೆಟ್ಟಿ, ಸರಸ್ವತಿ ಅಮಿತ್, ಅಮಿತ್ ಬಜ್ಪೆ, ಅನು ಶೆಟ್ಟಿ, ನವೀನ್ ಗೌಡ್ರು, ಜೈ ಕುಂಜಪ, ಐ. ಎಂ. ಅಡ್ಮಿನ್, ಟ್ರೋಲ್ ಬಾಹುಬಲಿ, ರಾಜೇಶ್ ನಾಯ್ಕ್, ಟ್ರೋಲ್ ತಿಮ್ಮ ರೌಡಿ, ಶೆಟ್ಟಿ ತನುಷ್ ಎಂಬ ಹೆಸರಿನ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
