Home ಕರಾವಳಿ ಬೆಳ್ತಂಗಡಿ: ವಿಜಯ ರಾಘವೇಂದ್ರ ಪತ್ನಿ ದಿ.ಸ್ಪಂದನ ಕುಟುಂಬಕ್ಕೆ ಮತ್ತೊಂದು ಅಘಾತ !ರಸ್ತೆ ಅಪಘಾತಕ್ಕೆ ಮಾವ ಬಲಿ

ಬೆಳ್ತಂಗಡಿ: ವಿಜಯ ರಾಘವೇಂದ್ರ ಪತ್ನಿ ದಿ.ಸ್ಪಂದನ ಕುಟುಂಬಕ್ಕೆ ಮತ್ತೊಂದು ಅಘಾತ !ರಸ್ತೆ ಅಪಘಾತಕ್ಕೆ ಮಾವ ಬಲಿ

0

ಬೆಳ್ತಂಗಡಿ: ರಸ್ತೆ ಅಪಘಾತಕ್ಕೆ ಪಾದಚಾರಿ ಬಲಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಚಿತ್ರನಟ ವಿಜಯ ರಾಘವೇಂದ್ರ ಪತ್ನಿ ದಿ.ಸ್ಪಂದನಾ ಅವರ ಮಾವ, ಹೇರಾಜೆ ಶೇಖರ ಬಂಗೇರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ದಿ.ಸ್ಪಂದನಾ ಹಾಗೂ ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಅವರ ತಾಯಿಯ ಸಹೋದರರಾಗಿದ್ದಾರೆ. ಹೆರಾಜೆ ಶೇಖರ ಬಂಗೇರ ಅವರು ಸಂತೆಕಟ್ಟೆಯಲ್ಲಿ ಫುಡ್ ಪಾರ್ಸೆಲ್ ಮಾಡಿಕೊಂಡು ರಸ್ತೆ ದಾಟುತ್ತಿದ್ದಾಗ ಯುವತಿಯೊಬ್ಬಳು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಶೇಖರ ಬಂಗೇರ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಗೂ ಗಂಭೀರ ಗಾಯಗೊಂಡಿದೆ.

LEAVE A REPLY

Please enter your comment!
Please enter your name here