Home ಕರಾವಳಿ ಕಾವೂರಿನಲ್ಲಿ ಶುಭಾರಂಭಗೊಂಡಿದೆ ಶ್ರೀ ರೇಣುಕಾಂಬೆ ಸಿಲ್ಕ್ ಸಾರೀಸ್ ಮತ್ತು ಟೆಕ್ಸ್ ಟೈಲ್ಸ್

ಕಾವೂರಿನಲ್ಲಿ ಶುಭಾರಂಭಗೊಂಡಿದೆ ಶ್ರೀ ರೇಣುಕಾಂಬೆ ಸಿಲ್ಕ್ ಸಾರೀಸ್ ಮತ್ತು ಟೆಕ್ಸ್ ಟೈಲ್ಸ್

0

ಮಂಗಳೂರು: ನಗರದ ಕಾವೂರಿನ ವೇದ ಟವರ್ಸ್ ನಲ್ಲಿ ಶ್ರೀ ರೇಣುಕಾಂಬೆ ಸಿಲ್ಕ್ ಸಾರೀಸ್ ಮತ್ತು ಟೆಕ್ಸ್ ಟೈಲ್ಸ್ ಶುಭಾರಂಭಗೊಂಡಿದ್ದು ,ಮಳಿಗೆಯ ಉದ್ಘಾಟನೆಯನ್ನು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಜರುಗಿಸಿದರು.


ಮಹಿಳೆಯರು ಸ್ವಾವಲಂಬಿಗಳಾಗಿ ಸ್ವ-ಉದ್ಯೋಗ ಮಾಡುವಲ್ಲಿ ಇನ್ನಷ್ಟು ಮುಂದೆ ಬರಬೇಕು ಹಾಗೂ ಕೇಂದ್ರ ಸರಕಾರ ಮಹಿಳೆಯರಿಗೆ ಸ್ವಾವಲಂಬಿ ವ್ಯಾಪಾರ ಮಾಡಲು ನೀಡುತ್ತಿರುವ ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಳಿನ್ ಕುಮಾರ್ ಕಟೀಲ್ ಅವರು ಹಿತನುಡಿಯನ್ನು ತಿಳಿಸಿದರು.


ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರಾದ ಸನ್ಮಾನ್ಯ ಶ್ರೀ ವೈ ಭರತ್ ಶೆಟ್ಟಿ ,ಶ್ರೀ ಜಿ.ಕೆ ಗಿರೀಶ್ ಉಪ್ಪಾರ್ ,ಮಾಜಿ ಅಧ್ಯಕ್ಷರು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ,ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಒಕ್ಕೂಟ (ರಿ ) ಇದರ ರಾಜ್ಯಾಧ್ಯಕ್ಷರು ಶ್ರೀಯುತ ಎಸ್. ಡಿ ನಾಗರಾಜ್ ,ಉದ್ಯಮಿಗಳಾದ ಶ್ರೀಯುತ ವಿಜಯಕುಮಾರ್ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಮಳಿಗೆಯ ಮಾಲಕಿ ಶ್ರೀಮತಿ ರೇಣುಕಾರವರು ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here