ಪುತ್ತೂರು: ಪುತ್ತೂರು ತಾಲೂಕಿನ ಜನರಿಗೆ ಚಿರಪರಿಚಿತವಾಗಿರುವ ಕುಂಬ್ರ ಪರಿಸರದ ಯುವ ಉದ್ಯಮಿ ಎಂ.ಎಂ ಶರಫುದ್ದೀನ್ ರವರು ಹಲವು ವರ್ಷಗಳಿಂದ ಪುತ್ತೂರು ಪರಿಸರದಲ್ಲಿ ಸೆಕೆಂಡ್ ಹ್ಯಾಂಡ್ ಟೂ ವೀಲರ್ ಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು ಬಹಳ ಕಷ್ಟ ಪಟ್ಟು ಮೇಲೆ ಬಂದ ಶ್ರಮಜೀವಿ ಇವರು 2023 ರಲ್ಲಿ ಮೊತ್ತ ಮೊದಲ ಬಾರಿಗೆ ಕುಂಬ್ರದಲ್ಲಿ ತನ್ನ ಮೊದಲ ಸೆಕೆಂಡ್ ಹ್ಯಾಂಡ್ ಟೂ ವೀಲರ್ ಶೋರೂಂ ತೆರೆದಿದ್ದು ಹಲವಾರು ರಾಜಕಾರಣಿಗಳು ಹಾಗೂ ರಂಗಭೂಮಿ ನಟರು ಈ ಕಾರ್ಯಕ್ರಮದಲ್ಲಿ ಭಾಗಾವಿಸಿದ್ದರು ಮತ್ತೊಂದು ವಿಶೇಷವೆಂದರೆ ಅದೇ ದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರ ಹೆಸರನ್ನು ಲಕ್ಕಿ ಡ್ರಾ ದಲ್ಲಿ ಹಾಕಿ ಒಬ್ಬ ವಿಜೇತರಿಗೆ ಒಂದು ಬೈಕ್ ಅನ್ನು ಕೂಡ ಉಚಿತವಾಗಿ ನೀಡಿ ವಿಭಿನ್ನ ರೀತಿಯಲ್ಲಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದ್ದರು.



ಅಲ್ಪ ಸಮಯದ ಅವಧಿಯಲ್ಲೇ ಇವರ ಉದ್ಯಮ ಬೆಳೆದಿದ್ದು ಪುತ್ತೂರಿನ ಮುರ ಪರಿಸರದಲ್ಲಿ ಕೂಡ ಇನ್ನೊಂದು ಶೋ ರೂಂ ತೆರೆದಿದ್ದಾರೆ ಹಾಗೆಯೇ ತಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸಲು ತಮ್ಮದೇ ಆದ ಸರ್ವಿಸ್ ಸೆಂಟರ್ ತೆರೆದಿರುವ ಇವರು ಮಡಿಕೇರಿಯ ಕುಶಾಲನಗರದಲ್ಲಿ ಕೂಡ ತಮ್ಮ ಟೂ ವೀಲರ್ ವ್ಯವಹಾರವನ್ನು ವಿಸ್ತರಿಸಿದ್ದಾರೆ ಅದಲ್ಲದೆ ತಮ್ಮದೇ ಒಂದು ಯೂಟ್ಯೂಬ್ ಚಾನಲ್ ಶುರು ಮಾಡಿ ಸುಮಾರು ಹದಿನೆಂಟು ಸಾವಿರಕ್ಕೂ ಹೆಚ್ಚು subscribers ಹೊಂದಿರುವ ಇವರು ಕರ್ನಾಟಕದಾದ್ಯಂತ ಹೆಸರುವಾಸಿಯಾಗಿ ಇವರ ಬಳಿ ಟೂ ವೀಲರ್ ಖರೀದಿ ಮಾಡಲು ಜನರು ಬರುತ್ತಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಯನ್ನು ಕಂಡು ಸಹಿಸಲಾರದ ಹುಣಸೂರಿನ ಒಬ್ಬ ಟೂ ವೀಲರ್ ಡೀಲರ್ ಶರಫುದ್ದೀನ್ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಅಪಪ್ರಚಾರ ಮಾಡಲು ಒಂದು ವಾಯ್ಸ್ ಮೆಸ್ಸೇಜ್ ಹರಿಬಿಟ್ಟಿದ್ದು , ಇದ್ನನ್ನು ಪತ್ತೆ ಹಚ್ಚಿ ಖುದ್ದು ಶರಫುದ್ದೀನ್ ಅವರು ಅವನ ಬಳಿ ದೂರವಾಣಿಯಲ್ಲಿ ಮಾತನಾಡಿದಾಗ ತಪ್ಪನ್ನು ಒಪ್ಪಿಕೊಳ್ಳದೆ ತನಗೇನೂ ಗೊತ್ತಿಲ್ಲದ ರೀತಿಯಲ್ಲಿ ವರ್ತಿಸಿದ್ದಾನೆ. ಈಗಾಗಲೇ ಎಂ.ಎಂ ಸಂಸ್ಥೆಯೊಂದಿಗೆ ಹಲವು ವಾಹನಗಳ ವ್ಯಾಪಾರವನ್ನು ಮಾಡಿರುವ ಈ ವ್ಯಕ್ತಿ ಸುಖಾಸುಮ್ಮನೆ ಸುಳ್ಳು ಆರೋಪವನ್ನು ಮಾಡಿದ್ದು ಬೇಷರದ ವಿಷಯ ಸದ್ಯಕ್ಕೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಇದು ಇದೇ ರೀತಿ ಮುಂದುವರೆದರೆ ಕ್ರಮ ಕೈಗೊಳ್ಳುವುದಾಗಿ ಆತನಿಗೆ ಎಚ್ಚರಿಕೆ ನೀಡಿದ್ದಾರೆ.