Home ಕರಾವಳಿ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಿಸಿ ಯುಟರ್ನ್ ಹೊಡೆದ ಸಿಎಂ, ಗ್ಯಾರಂಟಿಗಳಂತೆ ಈ...

ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಿಸಿ ಯುಟರ್ನ್ ಹೊಡೆದ ಸಿಎಂ, ಗ್ಯಾರಂಟಿಗಳಂತೆ ಈ ಭರವಸೆಯು ಪೊಳ್ಳಾಗದಿರಲಿ : ಕ್ಯಾಪ್ಟನ್ ಬ್ರಿಜೇಶ್ ಚೌಟ

0

ನವೆಂಬರ್ 22 ರಂದು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಹಾಗೂ ಭಾರತೀಯ ಸೇನೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದೀಗ ಮಾಧ್ಯಮ ವರದಿಗಾರರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ “ಯಾರು ಪ್ರಾಂಜಲ್” ಎಂಬ ಉಡಾಫೆ ಉತ್ತರ ನೀಡಿರುವುದು ಮುಖ್ಯಮಂತ್ರಿಗಳ ನಡೆ ಮತ್ತು ನುಡಿಗೆ ಸಂಬಂಧವೇ ಇಲ್ಲ ಎಂಬುದು ಸಾಬೀತಾಗಿದೆ.

“ಬಾಳಿ ಬೆಳಗಬೇಕಿದ್ದ ನಮ್ಮ ರಾಜ್ಯದ ಒಬ್ಬ ಯುವಕ ದೇಶಕ್ಕಾಗಿ ಸರ್ವೋಚ್ಚ ಬಲಿದಾನಗೈದ ನೋವು ಇನ್ನೂ ಮಾಸಿಲ್ಲ, ಹೀಗಿರುವಾಗ ಪರಿಹಾರ ಬಿಡಿ ನಮ್ಮ ಮುಖ್ಯಮಂತ್ರಿಗಳಿಗೆ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರೂ ತಿಳಿದಿಲ್ಲ ಎಂದರೆ ಇದು ನಮ್ಮ ದೌರ್ಭಾಗ್ಯ. ಗ್ಯಾರಂಟಿಗಳಂತೆ ಈ ಭರವಸೆಯು ಪೊಳ್ಳಾಗದಿರಲಿ, ಮುಖ್ಯಮಂತ್ರಿಗಳು ನೀವು ಯಾರನ್ನು ಮೆಚ್ಚಿಸಲು ಹೊರಟಿದ್ದೀರಿ? ಕೊಟ್ಟ ಮಾತಿನಂತೆ ಪ್ರಾಂಜಲ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ.

LEAVE A REPLY

Please enter your comment!
Please enter your name here