ಬೆಂಗಳೂರು: ಕಳೆದ ಕೆಲವು ದಿನಗಳಿಂದ, ಬೆಂಗಳೂರು ನಗರದಾದ್ಯಂತ “ಅತುಲ್ ಪತ್ನಿ ಕಾಣೆಯಾಗಿದ್ದಾಳೆ”, ಸೆಂತಿಲ್ ಪತ್ನಿ ಕಾಣೆಯಾಗಿದ್ದಾಳೆ”, “ರವಿ ಪತ್ನಿ ಕಾಣೆಯಾಗಿದ್ದಾಳೆ” ಮುಂತಾದ ದಿಟ್ಟ ಸಂದೇಶಗಳನ್ನು ಹೊಂದಿರುವ ನಿಗೂಢ ಜಾಹೀರಾತು ಫಲಕಗಳು ಕಂಡು ಬರುತ್ತಿದೆ.


ಹೌದು, ಈ ಜಾಹೀರಾತು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಏತಕ್ಕಾಗಿ ಹೆಂಡತಿಯರು ಕಾಣೆಯಾಗುತ್ತಿದ್ದಾರೆ? ಈ ಹೋರ್ಡಿಂಗ್ಸ್ಗಳ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.
ಹೆಂಡತಿಯರ ಕಾಣೆಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹೋರ್ಡಿಂಗ್ ಕಾಣಿಸುತ್ತಿದೆ. ಈ ನಿಗೂಢತೆ ಏನೆಂದು ನೋಡಲು ನಿಮಗೂ ಕಾತುರತೆ ಇದ್ದರೆ, ಖಂಡಿತ ಕಾಯಬೇಕು. ಈ ಹೋರ್ಡಿಂಗ್ನಲ್ಲಿರುವ ಕಾಣೆಯಾಗಿದ್ದಾರೆ ಫಲಕ ನಿಜವಾದುದ್ದೇ? ಅಥವಾ ಸಾಮಾಜಿಕ ಸಂದೇಶವೇ? ಇನ್ನೂ ಯಾರಿಗೂ ತಿಳಿದಿಲ್ಲ, ಕೆಲವೇ ದಿನಗಳಲ್ಲಿ ಈ ಎಲ್ಲದಕ್ಕೂ ಉತ್ತರ ಅದೇ ಹೋರ್ಡಿಂಗ್ನಲ್ಲಿ ಕಾಣಿಸಲಿದೆ.
ಪ್ರಸಿದ್ಧ ಛಾಯಾಗ್ರಾಹಕ ಅತುಲ್ ಕಸ್ಬೇಕರ್ ಕೂಡ ಇನ್ಸ್ಟಾಗ್ರಾಮ್ಗೆ ಹೋಗಿ ತಮ್ಮ ಹ್ಯಾಂಡಲ್ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅಷ್ಟೇ ಅಲ್ಲ, ಇದು ಏನಿರಬಹುದು ಎಂಬುದರ ಬಗ್ಗೆ ಜನರಲ್ಲಿಯೇ ಗೆಸ್ ಮಾಡಲು ಹೇಳಿದ್ದಾರೆ. ಸೂಕ್ತ ರೀತಿಯಲ್ಲಿ ಉತ್ತರ ನೀಡಿದವರಿಗೆ ಬಹುಮಾನ ನೀಡುವುದಾಗಿಯೂ ಹೇಳಿದ್ದಾರೆ.
ಅತುಲ್ ಕಾಸ್ಬೇಕರ್ ಪೋಸ್ಟ್ಗೆ ಲಿಂಕ್: https://www.instagram.com/stories/atulkasbekar/3707691573327623322/?igsh=MWw2ODE5NHl2YmhqZA%3D%3D#
ಈಶ್ವರ್ ಗೋ, ಹರಿಪ್ರಿಯಾ ಕುಲಕರ್ಣಿ, ಸರಿಫ್ಲಾಗ್ ಮತ್ತು ಇನ್ನೂ ಅನೇಕ ಪ್ರಭಾವಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇದೇ ವಿಷಯವನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದ್ದಾರೆ, ಇದು ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ ಮತ್ತು ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ: ನಿಜವಾಗಿಯೂ ಏನು ನಡೆಯುತ್ತಿದೆ?
ಅಲ್ಲಿಯವರೆಗೆ, ನಿಗೂಢತೆ ಮುಂದುವರಿಯುತ್ತದೆ.
