ಬಂಟ್ವಾಳ: ಮಂಗಳೂರು – ಬಿಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಡೆಗೋಳಿ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ದ್ವಾರದ ಬಳಿ “ಟಾಮ್ ಟ್ರೆಂಡಿ” ಪ್ರೊಫೆಷನಲ್ ಯುನಿಸೆಕ್ಸ್ ಸಲೂನ್ ಶುಕ್ರವಾರ ಶುಭಾರಂಭಗೊಂಡಿತು.


ಶ್ರೀ ಕೀರ್ತನ್ ಹಾಗೂ ಶ್ರೀಮತಿ ಐಶ್ವರ್ಯ ಕೀರ್ತನ್ ಮಾಲಕತ್ವದ ಅತ್ಯಾಧುನಿಕ ಸೌಲಭ್ಯಗಳನುಳ್ಳ ಈ ಪ್ರೊಫೆಷನಲ್ ಯುನಿಸೆಕ್ಸ್ ಸಲೂನ್ ಖ್ಯಾತ ರಂಗಭೂಮಿ ಹಾಗೂ ಚಿತ್ರ ನಟರಾದ ಶ್ರೀ ಚೇತನ್ ರೈ ಮಾಣಿ , ಉದ್ಯಮಿ ಸೋನ ಸಂದೀಪ್ ಶೆಟ್ಟಿ, ರಂಗ ಭೂಮಿ ಕಲಾವಿದ ಶ್ರೀ ಶಿವ ಕುಮಾರ್ ರೈ ಇವರ ಕೈಯಲ್ಲಿ ಉದ್ಘಾಟನೆಗೊಂಡಿತು.

ಇನ್ನುಳಿದಂತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ರಂಗಭೂಮಿ ಹಾಗೂ ಚಿತ್ರನಟ ಶ್ರೀ ತಿಮ್ಮಪ್ಪ ಕುಲಾಲ್, ಕಾಂಗ್ರೇಸ್ ಮುಖಂಡರಾದ ರಮಾನಂದ ಪೂಜಾರಿ ಬೋಳಾರ, ಡಾ.ಹಸನಬ್ಬ ಮುಬಾರಕ್ ಹಾಗೂ ಡಾ.ಫಾತಿಮಾ ಇಸ್ಮತ್ ಭಾಗವಹಿಸಿ ಹೊಸ ಉದ್ಯಮಕ್ಕೆ ಶುಭ ಹಾರೈಸಿದರು.






