Home ಕರಾವಳಿ ಫೆ.20ರಂದು ದಿ.ಬಾಳೆಪುಣಿ ಅವರ ದೊಡ್ಡವರು ಇವರು ಸನ್ಮಾನ್ಯರು ಕೃತಿ ಬಿಡುಗಡೆ

ಫೆ.20ರಂದು ದಿ.ಬಾಳೆಪುಣಿ ಅವರ ದೊಡ್ಡವರು ಇವರು ಸನ್ಮಾನ್ಯರು ಕೃತಿ ಬಿಡುಗಡೆ

0

ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಹಿರಿಯ ಪತ್ರಕರ್ತ ದಿ.ಗುರುವಪ್ಪ .ಎನ್.ಟಿ.ಬಾಳೆಪುಣಿ ಇವರ
‘ದೊಡ್ಡವರು ಇವರು ಸನ್ಮಾನ್ಯರು ’ ಕೃತಿ ಬಿಡುಗಡೆ ಸಮಾರಂಭ ಫೆ.20ರಂದು ಬೆಳಗ್ಗೆ 11ಕ್ಕೆ ನಗರದ ಪತ್ರಿಕಾ ಭವನದಲ್ಲಿ
ನಡೆಯಲಿದೆ.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಕೃತಿ ಬಿಡುಗಡೆ ಮಾಡಲಿದ್ದಾರೆ. ಹೊಸದಿಗಂತ ದೈನಿಕದ ಸಿಇಒ ಪಿ.ಎಸ್.ಪ್ರಕಾಶ್ ಕೃತಿ
ಪರಿಚಯ ನೀಡಲಿದ್ದಾರೆ. ಹಿರಿಯ ಪತ್ರಕರ್ತ ಆನಂದ ಶೆಟ್ಟಿ ಪ್ರಕಾಶಕರನ್ನು ಸನ್ಮಾನಿಸಲಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ತಾರ ಬಳಗದ ಸ್ಥಾಪಕ ಸಂಚಾಲಕ ಚಂದ್ರಶೇಖರ ಪಾತೂರು, ಕಿನ್ನಿಗೋಳಿಅನಂತ ಪ್ರಕಾಶದ ಮಿಥುನ್ ಕೊಡೆತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ.ಆರ್. ಉಪಸ್ಥಿತರಿರುವರು ಎಂದು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here