Home ಕರಾವಳಿ ಬೆಳ್ತಂಗಡಿ : MBA ವಿದ್ಯಾರ್ಥಿ ಬೆಂಗಳೂರಿನಲ್ಲಿ ಅಪಘಾತದಲ್ಲಿ ಮೃತ್ಯು..!

ಬೆಳ್ತಂಗಡಿ : MBA ವಿದ್ಯಾರ್ಥಿ ಬೆಂಗಳೂರಿನಲ್ಲಿ ಅಪಘಾತದಲ್ಲಿ ಮೃತ್ಯು..!

0

ಬೆಳ್ತಂಗಡಿ : ಬೆಂಗಳೂರಿನ ಎಂ.ಎಸ್‌. ರಾಮಯ್ಯ ಕಾಲೇಜಿನಲ್ಲಿ ಎಂ.ಬಿ.ಎ. ವಿದ್ಯಾರ್ಥಿಯಾಗಿದ್ದ ಬೆಳ್ತಂಗಡಿ ಇಂದಬೆಟ್ಟುವಿನ ಯುವಕ ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಇಂದಬೆಟ್ಟು ನಿವಾಸಿ ವಸಂತ ಗೌಡ ಅವರ ಪುತ್ರ ತುಷಾರ್‌ ಗೌಡ (22) ಮೃತಪಟ್ಟ ವಿದ್ಯಾರ್ಥಿ. ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ನ.8ರಂದು ಬೆಳಗ್ಗಿನ ಜಾವ ನಡೆದ ಬೈಕ್‌ ಮತ್ತು ಲಾರಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತುಷಾರ್ ಗೌಡ ಮೃತಪಟ್ಟಿದ್ದರು. ಇವರ ಬೈಕ್‌ನಲ್ಲಿದ್ದ ಸಹಸವಾರ ಬೆಳಾಲು ನಿವಾಸಿ ಸೃಜನ್‌ ಅವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ತುಷಾರ್ ಗೌಡ ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.  ಈ ಬಗ್ಗೆ ಬೆಂಗಳೂರಿನ ಯಲಹಂಕ ನ್ಯೂಟೌನ್‌ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here