ಉಡುಪಿ: ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Prakhara News
0 Min Read

ಉಡುಪಿ: ಕಂಟೇನರ್ ಲಾರಿಯ ಕೆಳಗೆ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಅಂಬಲಪಾಡಿಯಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು ದೊಂದೂರುಕಟ್ಟೆ ಮೂಲದ ಬೈಕ್ ಸವಾರ ಪ್ರದೀಪ್ (38) ಎಂದು ಗುರುತಿಸಲಾಗಿದೆ.

ಅಂಬಲಪಾಡಿಯಲ್ಲಿರುವ ಆಟೋಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಕಂಟೇನರ್ ಲಾರಿಯ ಕೆಳಗೆ ಸಿಲುಕಿ ತಲೆ ಸಂಪೂರ್ಣವಾಗಿ ಛಿದ್ರವಾಗಿತ್ತು.

ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಉಡುಪಿ ಸಂಚಾರ ಪೊಲೀಸರು ಕಾರ್ಯವಿಧಾನಗಳನ್ನು ನಡೆಸಿದರು.

Share This Article
Leave a Comment