ಮೂಡಬಿದ್ರೆ ತೋಡಾರು ಗ್ರಾಮದ ನಿವಾಸಿ ಪ್ರಸಾದ್ ಆಚಾರ್ಯ ಹಾಗೂ ಶಮಿತಾ ಆಚಾರ್ಯ ದಂಪತಿಗೆ ಏಪ್ರಿಲ್ 5ರಂದು ಬೆಳುವಾಯಿಯಲ್ಲಿ ನಡೆದ ವಾಹನ ಅಪಘಾತದಲ್ಲಿ ತೀರ್ವವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಈ ವಿಚಾರವನ್ನು ತಿಳಿದು ಯೂತ್ಸ್ ಆಫ್ ವಿಶ್ವಕರ್ಮ ಗ್ರೂಪ್ ನ ಸದಸ್ಯರು ರೂ.1,20,000 ಹಣವನ್ನು ಒಟ್ಟಾಗಿ ಸೇರಿಸಿ ಪ್ರಸಾದ್ ಆಚಾರ್ಯ ದಂಪತಿಗಳ ಚಿಕಿತ್ಸೆಗೆ ನೆರವಾಗಿದ್ದಾರೆ.



ಯೂತ್ಸ್ ಆಫ್ ವಿಶ್ವಕರ್ಮ ಗ್ರೂಪ್ ಸಮಾಜಕ್ಕೆ ಒಳ್ಳೆಯ ಮಾದರಿಯಾಗಿದೆ. ಸದಸ್ಯರ ಸಮಾಜಮುಖಿ ಚಿಂತನೆ ಹಾಗೂ ಕಾರ್ಯಕ್ಕೆ ಸಂಸ್ಥಾಪಕರು ಹಾಗೂ ಸಲಹೆಗಾರರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.


ಈ ಒಂದು ತಂಡ ಪ್ರಾರಂಭವಾದ 1ವರ್ಷದ ಒಳಗಿನ ಅವಧಿಯಲ್ಲಿ 20 ಕುಟುಂಬಕ್ಕೆ ಧನ ಸಹಾಯ ಮಾಡುವ ಮುಖಾಂತರ ನೆರವಾಗಿದೆ.