
ಮಂಗಳೂರು : ಮ೦ಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನೊಬೆಲ್ ಪಾರಿತೋಷಕ ವಿಜೇತ ವಿಶ್ವ ಕಂಡ ಭಾರತದ ಶ್ರೇಷ್ಠ ಜ್ಞಾನಿ ಡಾ. ಸಿ. ವಿ. ರಾಮನ್ ಅವರ ಸ್ಮರಣೆಯಲ್ಲಿ ಆಚರಿಸಲ್ಪಡುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.



ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NITK) ಸುರತ್ಕಲ್ ನ ಪ್ರಾದ್ಯಾಪಕರಾದ ಡಾ. ಅರುಣ್ ಇಸ್ಲೂರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಇವರು ‘ನಮ್ಮ ಪುರಾತನ ಕಾಲದಲ್ಲಿ ಗಾಂಧಾರಿ ವಿದ್ಯೆಯಂತಹ ಸಾಕಷ್ಟು ವಿದ್ಯೆಗಳಿದ್ದವು ಅದೊ೦ದು ವಿಜ್ಞಾನವೇ ಆಗಿದೆ. ಆದರೆ ಈಗಿನ ಕಾಲದಲ್ಲಿ ಆಧುನಿಕ ಎಜ್ಡಾನವನ್ನು ಕಲಿಯುತ್ತ ಕೆಲವೊಂದು ನಮ್ಮ ಪುರಾತನ
ವೈಜ್ಞಾನಿಕ ಕಲೆಗಳನ್ನು ಈಗಿನ ಮಕ್ಕಳು ಮರೆಯುತ್ತಿದ್ದಾರೆ.


ಆದರೆ ಶಕ್ತಿ ಶಾಲೆಯ ವಿದ್ಯಾರ್ಥಿಗಳು ಗಾಂಧಾರಿ ವಿದ್ಯೆಯನ್ನು ಕಲಿಯುತ್ತ ಇರುವುದು ನನಗೆ ಬಹಳ ಸ೦ತೋಷವಾಗಿದೆ. ಸಿವಿ ರಾಮನ್ ಅವರು ಭೌತ ಶಾಸ್ತ್ರಕ್ಕೆ ನೀಡಿದ ಅದ್ಭುತ ಕೊಡುಗೆಯನ್ನು ಸ್ಮರಿಸುತ್ತ ಇಂದು ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಭೌತ ಶಾಸ್ತ್ರಕ್ಕೆ ಅವರು ನೀಡಿದ ಅದ್ಭುತ ಕೊಡುಗೆಗೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ನೊಬೆಲ್ ಪಾರಿತೋಷಕ ವನ್ನು ಪಡೆದ ಕೀರ್ತಿ ಸಿ.ವಿ ರಾಮನ್ ಅವರದ್ದು. ಮಕ್ಕಳಾದವರು ತರಗತಿಯಲ್ಲಿ ಪ್ರಶ್ನೆಗಳನ್ನು ಕೇಳುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು.
ಪ್ರಶ್ನೆ ಕೇಳುವಲ್ಲಿ ಯಾವುದೇ ಹಿಂಜರಿಕೆ ಬೇಡ. ಈ ವರ್ಷ ಭಾರತದಲ್ಲಿ ನಮ್ಮ ಯುವಕರನ್ನು ಜಾಗತಿಕ ನಾಯಕರಾನ್ನಾಗಿ ಮಾಡುವ “ವಿಕಸಿತಾ ಭಾರತ” ಎಂಬ ವಿಷಯವು ಈ ವರ್ಷದ ಏಜ್ಞಾನ ದಿನಾಚರಣೆಯ ಮುಖ್ಯ ವಿಷಯವಾಗಿದೆ. ಶಕ್ತಿ ಶಾಲೆಯಲ್ಲಿ ಏಜ್ಞಾನ ಕ್ಯೆ ಸಂಬಂಧಿಸಿದ ಸಾಕಷ್ಟು ಚಟುವಟಿಕೆಗಳನ್ನು ನಡೆಸುತ್ತ ಇರೋದು ವಿಜ್ಞಾನ ದ ಪ್ರಚಾರಕ್ಕೆ ಪೂರಕವಾಗಿದೆ. ಮತ್ತೊಮ್ಮೆ ಮಕ್ಕಳಿಗೆ
ವಿಜ್ಞಾನ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸೋಹಮ್ ಮತ್ತು ಶ್ರೇಯ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ವಿವಿಧ ಬಗೆಯ ಬಣ್ಣಗಳನ್ನು, ವಸ್ತುಗಳನ್ನು, ಹಣ್ಣುಗಳನ್ನು, ತರಕಾರಿಗಳನ್ನು ಮತ್ತು ಕರೆನ್ಸಿ ನೋಟ್ ಗಳನ್ನು ಗುರುತಿಸಿ, ಪುಸ್ತಕವನ್ನು ಓದಿ, ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ಗಾಂಧಾರಿ ವಿದ್ಯೆ
ಯನ್ನು ಪ್ರದರ್ಶನ ಮಾಡಿದ್ದು ಆಕರ್ಷಣಿಯವಾಗಿತ್ತು.
ವಿದ್ಯಾ ಭಾರತಿಯ ವತಿಯಿಂದ ನಡೆಯುವ ರಾಷ್ಟ್ರ ಮಟ್ಟದ ಮೇಳ ಒಳಗೊಂಡು ಅಂತರಾಷ್ಟ್ರೀಯ ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿದ ಶಕ್ತಿ ರೆಸಿಡೆನ್ಸಿಯಲ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಶಾಸ್ತಾ ನಾಯ್ಕ್ ಪ್ರದರ್ಶಿಸಿದ ವಿಜ್ಞಾನ ಮಾದರಿಯ ಬಗ್ಗೆ ವಿವರಿಸಿದನು. ನಂತರ ಆಯ್ದ
ವಿಜ್ಞಾನ ವಿಷಯದಲ್ಲಿ. ಸಂಶೋಧನೆ. ಮಾಡುವ ವಿದ್ಯಾರ್ಥಿಗಳ ಜೊತೆ. ಸಂವಾದವನ್ನು ಏರ್ಪಡಿಸಲಾಯಿತು. ಭೌತ ಶಾಸ್ತ್ರ ಮತ್ತು ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗಳಿಗೆ ಅತಿಥಿಗಳಾದ ಅರುಣ್ ಅವರು ಉತ್ತರಿಸುವ ಮೂಲಕ ಮಕ್ಕಳಲ್ಲಿ ಪ್ರಶ್ನಿಸುವ ಕಲೆಯನ್ನು ಪ್ರೋತ್ಸಾಹಿದರು.
ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ ಮಾತನಾಡಿ ಶಕ್ತಿ ವಿದ್ಯಾ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿರುವ ವಿಜ್ಞಾನದ ಆಸಕ್ತಿಯನ್ನು ಗುರುತಿಸಿ ಅವರನ್ನು ಜಿಲ್ಲಾ, ರಾಜ್ಯ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವಂತೆ ಮಾಡುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನು
ಸಂಸ್ಥೆಯು ವಿಜ್ಞಾನದಲ್ಲಿ ಪ್ರಯೋಗ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಈ ದಿನವು ಎಲ್ಲಾ ವಿದ್ಯಾರ್ಥಿಗಳಿಗೆ ಶುಭವನ್ನು ತರಲೆಂದು ಶುಭ ಹಾರೈಸಿದರು.
ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ನ್ಯಾಕ್ ಕಾರ್ಯಕ್ರಮದ
ಅಧ್ಯಕ್ಷತೆಯನ್ನು ವಹಿಸಿದ್ದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಈ ಮೂರ್ತಿ ಹೆಚ್ ಉಪಸ್ಥಿತರಿದ್ದರು .ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಸ್ವಾಗತಿಸಿದರು. ವಿದ್ಯಾರ್ಥಿನಿ ಮನಸ್ವಿ ದಿನದ ಪ್ರಾಮುಖ್ಯತೆಯನ್ನು ವಾಚಿಸಿದರು. ಶಿಕ್ಷಕಿ ಮಧುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.