Home ಕರಾವಳಿ ಕೋಟೆಕಾರು ದರೋಡೆ ಕೃತ್ಯಕ್ಕೆ ಭಾಗಿಯಾದವರ ಹೆಸರು ಹೊರಗೆ ಬಾರದಂತೆ  ರಾಜಕೀಯ ರಕ್ಷಣೆ – ಭರತ್‌ ಶೆಟ್ಟಿ

ಕೋಟೆಕಾರು ದರೋಡೆ ಕೃತ್ಯಕ್ಕೆ ಭಾಗಿಯಾದವರ ಹೆಸರು ಹೊರಗೆ ಬಾರದಂತೆ  ರಾಜಕೀಯ ರಕ್ಷಣೆ – ಭರತ್‌ ಶೆಟ್ಟಿ

0

ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್‌ನ ಕೆ.ಸಿ ರೋಡ್‌ ಶಾಖೆಯಲ್ಲಿ ಕಳೆದ ಶುಕ್ರವಾರ ಹಾಡಹಗಲೇ ನಡೆದಿರುವ ದರೋಡೆಯಲ್ಲಿ ಸ್ಥಳೀಯರ ಕೈವಾಡವಿದ್ದರೂ ರಾಜಕೀಯ ಕಾರಣಗಳಿಗಾಗಿ ಅವರ ಹೆಸರು ಹೊರಬಾರದಂತೆ ಮಾಡಲಾಗಿದೆ ಎಂದು ಶಾಸಕ ಭರತ್‌ ಶೆಟ್ಟಿ ಬಾಂಬ್‌ ಸಿಡಿಸಿದ್ದಾರೆ.

ಸ್ಥಳೀಯರ ಕೈವಾಡವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನ ಮಾಡಲಾಗುತ್ತಿದೆ. ಪೊಲೀಸರು ದರೋಡೆ ಮಾಡಿದವರನ್ನು ಬಂಧಿಸಿ ಮೂರು ದಿನ ಆದರೂ ದರೋಡೆಗೆ ಪ್ಲಾನ್‌ ಮಾಡಿದವರ ಕುರಿತು ಇನ್ನೂ ಯಾವುದೇ ಮಾಹಿತಿ ಕಲೆಹಾಕುವ ಗೋಜಿಗೆ ಹೋಗದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಭರತ್‌ ಶೆಟ್ಟಿ ಆರೋಪಿಸಿದ್ದಾರೆ. ದರೋಡೆ ನಡೆದ ರೀತಿಯಿಂದಲೇ ಇದು ಸ್ಥಳೀಯರ ಕೈವಾಡದಿಂದ ನಡೆದ ಕೃತ್ಯ ಎನ್ನುವುದನ್ನು ಆರಂಭದಿಂದಲೂ ಮಾಧ್ಯಮಗಳು ಹೇಳುತ್ತಿವೆ. ಪೊಲೀಸರೂ ಈ ನಿಟ್ಟಿನಲ್ಲಿ ತನಿಖೆ ಪ್ರಾರಂಭಿಸಿದ್ದರು. ಆದರೆ ರಾಜಕೀಯ ಕಾರಣಗಳಿಗಾಗಿ ಅವರ ಕೈಗಳನ್ನು ಕಟ್ಟಿಹಾಕಿದ ಅನುಮಾನವಿದೆ. ಮಂಗಳೂರು ನಗರದಿಂದ ಸುಮಾರು 22 ಕಿ.ಮೀ. ದೂರದಲ್ಲಿರುವ ಸಣ್ಣ ಪೇಟೆಯಲ್ಲಿ ಇರುವ ಬ್ಯಾಂಕನ್ನೇ ತಮಿಳುನಾಡಿನ ದರೋಡೆಕೋರರು ದರೋಡೆಗೆ ಆಯ್ದುಕೊಂಡದ್ದು ಹೇಗೆ ಎನ್ನುವ ಸರಳ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೂ ಸ್ಥಳೀಯರ ಕೈವಾಡದ ಮಾಹಿತಿ ಸಿಗುತ್ತದೆ. ಆದರೆ ಈಗ ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ದರೋಡೆ ಸಂಚುಕೋರರಿಗೆ ರಾಜಕೀಯ ಬೆಂಬಲವಿದೆ. ದರೋಡೆ ಪ್ರಕರಣದಲ್ಲಿ ಶೇ.100 ಸ್ಥಳೀಯರು ಇರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ದರೋಡೆಕೋರರನ್ನು ಬಂಧಿಸಲಾಗಿದೆ. ಆದರೆ ಪ್ಲಾನಿಂಗ್ ಮಾಡಿದವರನ್ನು, ಕುಮ್ಮಕ್ಕು ನೀಡಿದವರನ್ನು ಯಾರೋ ಬಚಾವ್ ಮಾಡುತ್ತಿದ್ದಾರೆ. ಅವರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕೃತ್ಯಕ್ಕೆ ಸಹಕಾರ ನೀಡಿದ ನೈಜ ಆರೋಪಿಗಳನ್ನು ಬಯಲಿಗೆ ತನ್ನಿ ಎಂದು ಭರತ್‌ ಶೆಟ್ಟಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

LEAVE A REPLY

Please enter your comment!
Please enter your name here