Home ತಾಜಾ ಸುದ್ದಿ  ಸಿಲಿಂಡರ್ ಸ್ಫೋಟ ಪ್ರಕರಣ- ಚಿಕಿತ್ಸೆ ಫಲಿಸದೇ ಇಬ್ಬರು ಮಾಲಾಧಾರಿಗಳ ಸಾವು..!

 ಸಿಲಿಂಡರ್ ಸ್ಫೋಟ ಪ್ರಕರಣ- ಚಿಕಿತ್ಸೆ ಫಲಿಸದೇ ಇಬ್ಬರು ಮಾಲಾಧಾರಿಗಳ ಸಾವು..!

0

ಹುಬ್ಬಳ್ಳಿ: ಸಿಲಿಂಡರ್ ಸೋರಿಕೆ ಪ್ರಕರಣ, ಚಿಕಿತ್ಸೆ ಫಲಿಸದೆ ಇಬ್ಬರು ಅಯ್ಯಪ್ಪ ಮಾಲಾದಾರಿಗಳು ಸಾವನ್ನಪ್ಪಿದ್ದಾರೆ.‌

ಕಳೆದ ಮೂರು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಒಂಬತ್ತು ಮಾಲಾಧಿಗಾರಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಿಜಲಿಂಗಪ್ಪ ಬೇಪುರಿ(58), ಸಂಜಯ ಸವದತ್ತಿ (18) ಮೃತ ಮಾಲಾದಾರಿಗಳು‌ ಕೊನೆ ಉಸಿರೆಳೆದಿದ್ದಾರೆ.‌ ಇನ್ನುಳಿದ ಏಳು ಅಯ್ಯಪ್ಪ ಮಾಲಾಧಿಗಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಮಾಲಾಧಾರಿಗಳ ಜೀವ ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡಿದ್ದ ಕಿಮ್ಸ್ ವೈದ್ಯರ ತಂಡ. ಅಲ್ಲದೆ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಬೆಂಗಳೂರಿನಿಂದ ತಜ್ಞ ವೈದ್ಯರನ್ನ ಕರೆಸಿದ್ದ ಸಚಿವ ಸಂತೋಷ ಲಾಡ್ ಮತ್ತು ಸರ್ಕಾರ. ಆದ್ರೆ ದುರಾದೃಷ್ಟವಶಾತ್ ಬದುಕುಳಿಯಲಿಲ್ಲ ಇಬ್ಬರು ಅಯ್ಯಪ್ಪ ಮಾಲಾಧಿಗಾರಿಗಳು.

LEAVE A REPLY

Please enter your comment!
Please enter your name here