ಮಂಗಳೂರು: ಮಂಗಳೂರಿನ ಹೆಸರಾಂತ ಶ್ರೀ ವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯಲ್ಲಿಒಂಬತ್ತನೇ “ರಾಷ್ಟ್ರೀಯ ಆಯುರ್ವೇದ ದಿನಾಚರಣೆ” -“ಧನ್ವಂತರಿ ಜಯಂತಿಯ ಪ್ರಯುಕ್ತ ನಾಳೆ ಉಚಿತ ಆಯುರ್ವೇದ ತಪಾಸಣಾ ಶಿಬಿರ ನಡೆಯಲಿದೆ, ಹಾಗೆಯೇ ಸಾರ್ವಜನಿಕರಿಗೆ ರಕ್ತದ ಒತ್ತಡ ಪರೀಕ್ಷೆ, ಮಧುಮೇಹ ಪರೀಕ್ಷೆ ಕೂಡಾ ಉಚಿತವಾಗಿ ನಡೆಯಲಿದೆ ಎಂದು ವೈದ್ಯರಾದ ಡಾ. ಕೇಶವ್ ರಾಜ್ ಅವರು ತಿಳಿಸಿದರು.



ಈ ಆಸ್ಪತ್ರೆಯಲ್ಲಿ ಸಮಾಜದ ಎಲ್ಲಾ ವರ್ಗಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ, ಇಲ್ಲಿ ವಿಶೇಷವಾಗಿ ಒಳರೋಗಿ ಸೌಲಭ್ಯ , ಯೋಗ ಹಾಗೂ ಪ್ರಾಣಾಯಾಮದ ತರಗತಿ, ಆಹಾರ ಮತ್ತು ಪೌಷ್ಟಿಕಾಂಶದ ಸಮಾಲೋಚನೆ, ಮಾನಸಿಕ ಸಮಾಲೋಚನೆ, ವಿಶೇಷ ಪಂಚ ಕರ್ಮ ಚಿಕಿತ್ಸೆ , ಮಧುಮೇಹ, ಅಧಿಕ ರಕ್ತದೊತ್ತಡ, ನಿದ್ರಾಹೀನತೆ ಸೇರಿ ಚರ್ಮಕ್ಕೆ ಸಂಭದಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
