ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಜರಂಗದಳದ ಕಾರ್ಯಕರ್ತರು ಪೋಲೀಸರ ನೆರವಿನಿಂದ ಕಾಸಾಯಿಖಾನೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದ ಗೋವುಗಳನ್ನು ರಕ್ಷಿಸಿದ ಘಟನೆ ಸಂಭವಿಸಿದೆ.
ಸುರತ್ಕಲ್ ನಲ್ಲಿ ಕಾಸಯಿಖಾನೆಯೊಂದರಲ್ಲಿ ಬಕ್ರೀದ್ ವಧೆಗಾಗಿ ತಂದ 12 ಕ್ಕೂ ಹೆಚ್ಚು ಗೋವುಗಳನ್ನು ಮಂಗಳೂರು ಬಜರಂಗದಳದ ಕಾರ್ಯಕರ್ತರು ಪೋಲೀಸರ ನೆರವಿನಿಂದ ಸಂರಕ್ಷಿಸಿದ್ದಾರೆ.
ಸದ್ಯ ಗೋಗಳ ರಕ್ಷಣಾ ಕಾರ್ಯ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.