ಅಕ್ಟೋಬರ್ 2022 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಮೂರು ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಜ್ಜಾದ್, ಆಸೀಫ್ ಹಾಗೂ ಶಾಫಿ ಎನ್ನುವ ಮೂರು ಆರೋಪಿಗಳ ವಿರುದ್ಧ ಅಪ್ರಾಪ್ತ ಯುವತಿಯ ತಂದೆ ನೀಡಿದ ದೂರಿನ ಪ್ರಕಾರ ಅಪ್ರಾಪ್ತ ಯುವತಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣ ದಾಖಲಾಗುತ್ತದೆ.



ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮಾನ್ಯ ಎರಡನೇ ಹೆಚ್ಚುವರಿ ಪೋಸ್ಕೋ ತ್ವರಿತ ನ್ಯಾಯಾಲಯ ಮಂಗಳೂರು ಸಾಕ್ಷಿಗಳ ವಿಚಾರಣೆಗಳು ನಡೆಸಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಮಂಜುಳಾ ಇಟ್ಟಿ ಇವರು ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಆರೋಪಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿರುತ್ತಾರೆ, ಒಂದನೇ ಆರೋಪಿಯ ಪರ ಮಂಗಳೂರಿನ ಲೆಕ್ಸ್ ಜೂರಿಸ್ ಲಾ ಚೇಂಬರಿನ ಯುವ ವಕೀಲರಾದ ಮಹಮ್ಮದ್ ಅಸ್ಗರ್ ಮುಡಿಪು, ಎರಡನೇ ಆರೋಪಿಯ ಪರ ಚಿದಾನಂದ ಪೆರುವಾಯಿ ಮತ್ತು ಮನೋಹರ್ ಬಂಟ್ವಾಳ್ ಮತ್ತು ಮೂರನೇ ಆರೋಪಿಯ ಪರ ರಾಜೇಶ್ ಕೆ ಜಿ ಮತ್ತು ಅಬ್ದುಲ್ ಅಝೀಜ್ ಮುಟ್ಟಾಜೆ ಬಾಯರ್, ವಾದವನ್ನು ಮಂಡಿಸಿರುತ್ತಾರೆ.
