ಮಂಗಳೂರು: ಕೈಕಂಬ ಬಡಗ ಎಡಪದವು ತಿಪ್ಲಬೆಟ್ಟು ಕೆ. ಯುವರಾಜ್ ಆಚಾರ್ಯ ಅವರ ಮನೆಯಲ್ಲಿ 1.40 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ
ಬಂಧಿತ ಆರೋಪಿಗಳು ಬಡಗ ಎಡಪದವಿನ ಉರ್ಕಿ ಬೆಟ್ಟು ಜ್ವಾರಮನೆಯ ರವಿ ಶೆಟ್ಟಿ (55) ಮತ್ತು ಮೂಡುಬಿದಿರೆ ತೋಡಾರ್ ಗ್ರಾಮದ ಕಲ್ಲಸಂಕ ನಿವಾಸಿ ಶಿವಪ್ರಸಾದ್ ಶೆಟ್ಟಿ (29) ಎಂದು ತಿಳಿಯಲಾಗಿದೆ.
ಮೂಡುಬಿದಿರೆ ಸ್ವರಾಜ್ ಮೈದಾನದ ಸಮೀಪದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಎಲ್ಲ ಸೊತ್ತುಗಳು ಪೊಲೀಸರ ವಶಕ್ಕೆಅವರು ಬೀಗವನ್ನು ಒಡೆದು ಮನೆಯಲ್ಲಿದ್ದ ಸುಮಾರು 1.40 ಲಕ್ಷ ರೂಪಾಯಿ ಬೆಲೆಬಾಳುವ ಕೇಬಲ್, ಫ್ಯಾನ್, ಬಾಗಿಲು, ಕಿಟಕಿ ಇನ್ನಿತರ ವಸ್ತುಗಳನ್ನು ಕಳವು ಮಾಡಿದ ಬಗ್ಗೆ ಎ. 3ರಂದು ಪ್ರಕರಣ ದಾಖಲಾಗಿತ್ತು. ಕಳವು ಮಾಡಿದ್ದ ಎಲ್ಲ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ನಿರೀಕ್ಷಕರ ನೇತೃತ್ವದ ಪತ್ತೆ ತಂಡ
ಆರೋಪಿಗಳ ಪತ್ತೆ ಕಾರ್ಯಕ್ಕೆ ಬಜಪೆ ಠಾಣೆಯ ಪೊಲೀಸ್ ನಿರೀಕ್ಷಕ ನಂದೀಶ್ವರ್ ಬಿ. ಕುಂಬಾರ ನೇತೃತ್ವದ ತಂಡ ರಚನೆ ಮಾಡಲಾಗಿತ್ತು. ಅವರೊಂದಿಗೆ ತಂಡದಲ್ಲಿದ್ದ ಪಿಎಸ್ಸೆ„ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ರವಿ ಎನ್.ಎನ್., ಶೋಭಾ ಆರ್. ಹಾಗೂ ಎಎಸ್ಐ ರಾಮ ಪೂಜಾರಿ ಮತ್ತು ಸಿಬಂದಿ ಸುಜನ್, ಪುರುಷೋತ್ತಮ, ರಶೀದ್, ದೇವಪ್ಪ ಹೊಸಮನಿ, ಬಸವರಾಜ್ ಪಾಟೀಲ್, ಪ್ರಕಾಶ್ ಚಿದಾನಂದ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.