ಮಂಗಳೂರು: ದಕ್ಷಿಣ ಕನ್ನಡದ ಸಂಸದ ಬದಲಾಗಬೇಕು ಎಂದು ಸ್ವ ಪಕ್ಷದ ಕಾರ್ಯ ಕರ್ತರಿಂದಲೇ ಒತ್ತಡ ಹೆಚ್ಚಾಗುತ್ತಿರುವ ಈ ಸಂಧರ್ಬದಲ್ಲಿ ಮಂಗಳೂರಿನ ಕೊಡಮಣಿತ್ತಾಯ ದೈವ ಪಾತ್ರಿ ಅಭಿಲಾಶ್ ಚೌಟ ಅವರು ವಿಶಿಷ್ಟ ಹರಕೆಯೊಂದನ್ನು ಹೇಳಿದ್ದಾರೆ.



ಬ್ರಿಜೇಶ್ ಚೌಟ ಬಿಜೆಪಿಯ ಅಭ್ಯರ್ಥಿ ಆಗಬೇಕು ಹಾಗೂ ಸಂಸದರಾಗಿ ಗೆದ್ದು ದೆಹಲಿಗೆ ಹೋಗ ಬೇಕು ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಈಗಿರುವುದಕ್ಕಿಂತಲೂ ಹೆಚ್ಚಿನ ಬಹುಮತದಿಂದ ಗೆದ್ದು ಮತ್ತೊಮ್ಮೆ ಪ್ರಧಾನಿ ಆದರೆ ಮಂಗಳೂರಿನ ಕದ್ರಿ ದೇವಾಸ್ಥಾನದಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪಾದಯಾತ್ರೆ ಮಾಡಿ ಮೂಕಾಂಬಿಕೆಯ ಮುಂದೆ 48 ಸುತ್ತು ಮಡಸ್ತಾನ ಹಾಕುತ್ತೇನೆ ಎನ್ನುವ ಹರಕೆಯನ್ನು ಹೊತ್ತು ಕೊಂಡಿದ್ದಾರೆ.
