ಮಂಗಳೂರು: ಎನ್ಐಎ ಅಧಿಕಾರಿಗಳು ಮದರಸಾಗಳಲ್ಲಿ ತಪಾಸಣೆ ನಡೆಸಿದರೆ ಬೆಂಗಳೂರು ಸ್ಪೋಟದ ಶಂಕಿತ ಉಗ್ರನ ಮಾಹಿತಿ ಸಿಗಬಹುದು. ಭಟ್ಕಳದ ಮಸೀದಿಗಳಿಗೆ ದಾಳಿ ನಡೆಸಿ ವಿಚಾರಿಸಬೇಕು ಎಂದು ವಿ ಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.



ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಮತ್ತು ಪೊಲೀಸರು ದಾಳಿ ಮಾಡಿ ತನಿಖೆ ಮಾಡಲಿ, ಖಂಡಿತ ಮಾಹಿತಿ ಸಿಗಲಿದೆ.

ಮದರಸಾಗಳು ಭಯೋತ್ಪಾದಕರ ತಾಣಗಳಾಗುತ್ತಿದೆ. ಉಗ್ರರಿಗೆ ಶಿಕ್ಷಣ ಕೊಡುವ ವ್ಯವಸ್ಥೆ ಕೆಲವು ಮದರಸಾದ ಮೌಲ್ವಿಗಳು ಮಾಡುತ್ತಿದ್ದಾರೆ ಎಂದರು.
ಎನ್ಐಎ ಅಧಿಕಾರಿಗಳಿಗೆ ಸಾಥ್ ಕೊಡಲು ನಾವು ಸಿದ್ದರಿದ್ದೇವೆ. ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಕಾರ್ಯಕರ್ತರಿಗೆ ಆರೋಪಿಯ ಫೋಟೊ ಹಂಚುತ್ತಿದ್ದೇವೆ ಎಂದು ಹೇಳಿದರು.