Home ಕರಾವಳಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಅಭಿಷ್ ರೈ ಮಂದಾರಗೆ ಚಿನ್ನದ ಪದಕ

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಅಭಿಷ್ ರೈ ಮಂದಾರಗೆ ಚಿನ್ನದ ಪದಕ

0

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೊರಗಪ್ಪ ಹಾಲ್ ನಲ್ಲಿ ನವಂಬರ್ 26 ರಂದು ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನರಿಮೊಗ್ರು ಸಾಂದೀಪನಿ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿ ಆಭಿಷ್ ರೈ ಮಂದಾರರವರು ಕಟಾ ಹಾಗೂ ಕುಮಿಟಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಇವರು ಕರಾಟೆ ಶಿಕ್ಷಕ ನಾರಾಯಣ ಕಾವು ರವರಿಂದ ತರಬೇತಿ ಪಡೆಯುತ್ತಿದ್ದಾರೆ.
ಅಭಿಷ್ ರೈ ಈಗಾಗಲೆ ಅಂಬರ ಮರ್ಲೆರ್, ಪನೊಡಾ ಬೊಡಚ, ಬಾಬಣ್ಣ ಬೂಬಣ್ಣ ಧಾರಾವಾಹಿಗಳಲ್ಲಿ ನಟಿಸಿ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಇವರು ತುಳು ರಂಗಭೂಮಿ ನಟ, ನಿರ್ದೇಶಕ ಸುಂದರ್ ರೈ ಮಂದಾರ ಹಾಗೂ ಮಲ್ಲಿಕಾ ರೈ ಮಂದಾರರವರ ಪುತ್ರ.

LEAVE A REPLY

Please enter your comment!
Please enter your name here