ಉಡುಪಿ ಜಯಲಕ್ಷ್ಮಿ ಸಿಲ್ಕ್ಸ್ ಮಾಲಕರಿಂದ ಆಟೋ ರಿಕ್ಷಾ ಚಾಲಕರ ಮೇಲೆ ದಬ್ಬಾಳಿಕೆ ಪ್ರಕರಣ ನಾಳೆ ಉಡುಪಿಯ ಎಲ್ಲಾ ಆಟೋ ಯೂನಿಯನ್ ಸದಸ್ಯರಿಂದ ಕಾಲ್ನಡಿಗೆ ಪ್ರತಿಭಟನಾ ಮೆರವಣಿಗೆ
ಉಡುಪಿ: ಇತ್ತೀಚೆಗೆ ಉಡುಪಿಯ ಬನ್ನಂಜೆಯಲ್ಲಿರುವ ಜಯಲಕ್ಷ್ಮಿ ಸಿಲ್ಕ್ಸ್ ಮಾಲಕರು ಹಾಗೂ ಸಿಬ್ಬಂದಿಗಳು ಬಡ ರಿಕ್ಷಾ ಚಾಲಕನ ವಾಹನ ಅಡ್ಡಗಟ್ಟಿ ಕೀ ಕಸಿದುಕೊಂಡು ಆತನ ಮೇಲೆ ದಬ್ಬಾಳಿಕೆ ನಡೆಸಿದ ಘಟನೆ ನಡೆದಿದ್ದು ಅಲ್ಲದೆ ಆಟೋ ಚಾಲಕರ ಮೇಲೆಯೇ ಪೋಲೀಸ್ ಕೇಸ್ ದಾಖಲುಗೊಂಡಿದ್ದು ಇದನ್ನು ವಿರೋಧಿಸಿ ನಾಳೆ ಬೆಳಿಗ್ಗೆ 10 ಗಂಟೆಗೆ ಉಡುಪಿಯ ಎಲ್ಲಾ ಆಟೋ ಚಾಲಕರ ಯೂನಿಯನ್ ಗಳು ಒಗ್ಗಟ್ಟಾಗಿ ಉಡುಪಿಯ ರಾಜಾಂಗಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತಲುಪಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.