ಮಂಗಳೂರು: ದಕ್ಷಿಣ ಕನ್ನಡ ತೆಂಗು ಉತ್ಪಾದಕರ ಸಂಸ್ಥೆ (ನಿ) ಇದರ ಪ್ರಾದೇಶಿಕ ಕಚೇರಿ ಉದ್ಘಾಟನೆ ಮತ್ತು ತೆಂಗು ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮವು ನವೆಂಬರ್ 16 ರಂದು ಪೂರ್ವಾಹ್ನ 10 ಗಂಟೆಗೆ ಸೂರ್ಯನಾರಾಯಣ ದೇವಸ್ಥಾನದ ಬಳಿ,ಮರೋಳಿ ಮಂಗಳೂರಿನಲ್ಲಿ
ನಡೆಯಲಿರುವುದು.



ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಡಾ ಧರ್ಮಪಾಲನಾಥ ಸ್ವಾಮೀಜಿಯವರು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ ಕಾವೂರು,ಮಂಗಳೂರು ಇವರು ದೀಪ ಬೆಳಗಿಸಿ ಸನ್ಮಾನ್ಯ ಯು. ಟಿ.ಖಾದರ್ ಮಾನ್ಯ ಸಭಾಪತಿಗಳು,ಕರ್ನಾಟಕ ರಾಜ್ಯ ಸರಕಾರ ಇವರು ಕಚೇರಿಯ ಉದ್ಘಾಟನೆಯನ್ನು ನೆರವೇರಿಸಿ, ಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಲಿರುವರು.

ಮುಖ್ಯ ಅತಿಥಿಗಳಾಗಿ
ಶ್ರೀ ಡಿ ವೇದವ್ಯಾಸ ಕಾಮತ್ ,ಮಾನ್ಯ ಶಾಸಕರು,ಮಂಗಳೂರು ನಗರ ದಕ್ಷಿಣ ವಿಭಾಗ
ಶ್ರೀ ಮಿಥುನ್ ರೈ ,ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ,ಮಂಗಳೂರು
ಶ್ರೀ ಡಾ ಹೆಬ್ಬಾರ್ ಕೆ ಬಿ ,ನಿರ್ದೇಶಕರು ಐ.ಸಿ.ಎ.ಆರ್ -ಸಿ.ಪಿ.ಸಿ.ಆರ್.ಐ ಕಾಸರಗೋಡು
ಶ್ರೀ ಹೆಚ್.ಆರ್.ನಾಯ್ಕ್ ,ಉಪ ನಿರ್ದೇಶಕರು,ತೋಟಗಾರಿಕೆ ಇಲಾಖೆ
ಕೆಂಪೇಗೌಡ ಹೆಚ್ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಮಂಗಳೂರು ದ. ಕ
ಶ್ರೀ ಕೇಶವ ಮರೋಳಿ,ಕಾರ್ಪೊರೇಟ್,ಮರೋಳಿ ವಾರ್ಡ್
ಶ್ರೀ ಸಂಗೀತಾ ಎಸ್ ಕರ್ತಾ,ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು NABARD, ದಕ್ಷಿಣಕನ್ನಡ
ಡಾ. ರಮೇಶ್ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು
ಶ್ರೀ ರವಿಕಿರಣ್ ಪುಣಚ ರಾಜ್ಯ ಪ್ರಧಾನ ಕಾರ್ಯದರ್ಶಿಗಳು,ಕರ್ನಾಟಕ ರಾಜ್ಯ ರೈತ ಸಂಘ
ಶ್ರೀ ರೂಪೇಶ್ ರೈ ಅಲಿಮಾರ್,,ಕರ್ನಾಟಕ ರಾಜ್ಯ ರೈತ ಹಸಿರು ಸೇನೆಯ ದ.ಕ ಜಿಲ್ಲಾ
ಸಂಚಾಲಕರು ಹಾಗೂ ದ. ಕ. ಜಿಲ್ಲಾ ರೈತ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥರು
ಶ್ರೀ ಜೀವನ್.ಜಿಲ್ಲಾ ಮುಖ್ಯಸ್ಥರು ಭಾರತೀಯ ವಿಕಾಸ್ ಟ್ರಸ್ಟ್ ಮಂಗಳೂರು
ಸಂಸ್ಥೆಯ ಸಲಹಾ ಸಮಿತಿ ಸದಸ್ಯರು ಹಾಗೂ ನಿರ್ದೆಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.