Home ಕರಾವಳಿ ಮಂಗಳೂರಿನ ಹೆಸರಾಂತ ಶ್ರೀ ವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಜಯಂತಿಯ ಪ್ರಯುಕ್ತ...

ಮಂಗಳೂರಿನ ಹೆಸರಾಂತ ಶ್ರೀ ವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಜಯಂತಿಯ ಪ್ರಯುಕ್ತ ಇದೇ ನವಂಬರ್ 10 ಹಾಗೂ 11 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಮಂಗಳೂರು: ಮಂಗಳೂರಿನ ಹೆಸರಾಂತ ಶ್ರೀ ವೇದಂ ಆಯು ಮಲ್ಟಿ ಸ್ಪೆಷಾಲಿಟಿ ಆಯುರ್ವೇದ ಆಸ್ಪತ್ರೆಯಲ್ಲಿ ಧನ್ವಂತರಿ ಜಯಂತಿಯ ಪ್ರಯುಕ್ತ ಇದೇ ನವಂಬರ್ 10 ಹಾಗೂ 11 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದ್ದು ಸಾರ್ವಜನಿಕರು ಈ ಉಚಿತ ತಪಾಸಣೆಯ ಸದುವಯೋಗವನ್ನು ಪಡೆದುಕೊಳ್ಳಬೇಕೆಂದು ವೈದ್ಯರಾದ ಡಾ. ಕೇಶವ್ ರಾಜ್ ಅವರು ತಿಳಿಸಿದರು.


ಉಚಿತವಾಗಿ ರಕ್ತದೊತ್ತಡ ಪರೀಕ್ಷೆ, ರಕ್ತದ ಪರೀಕ್ಷೆ, ನಾಡಿ ಪರೀಕ್ಷೆ ಸೌಲಭ್ಯಗಳು ಲಭ್ಯವಿದ್ದು ಔಷಧಿ ಹಾಗೂ ಚಿಕಿತ್ಸೆಯ ಮೇಲೆ ಶೇಕಡ 5% ರಿಯಾಯಿತಿ ದೊರೆಯಲಿದೆ. ಅದಲ್ಲದೇ ಉಚಿತ BMD ಅಥವಾ ಮೂಳೆ ಖನಿಜ ಸಾಂದ್ರತೆಯ ಪರೀಕ್ಷೆಯ ಸೌಲಭ್ಯವೂ ಇದೆ. ಮುಖ್ಯವಾಗಿ 35 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಯೂ ನಿಯಮಿತ ಮಧ್ಯಂತರದಲ್ಲಿ BMD ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಈ ಆಸ್ಪತ್ರೆಯಲ್ಲಿ ಸಮಾಜದ ಎಲ್ಲಾ ವರ್ಗಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ, ಇಲ್ಲಿ ವಿಶೇಷವಾಗಿ ಒಳರೋಗಿ ಸೌಲಭ್ಯ , ಯೋಗ ಹಾಗೂ ಪ್ರಾಣಾಯಾಮದ ತರಗತಿ, ಆಹಾರ ಮತ್ತು ಪೌಷ್ಟಿಕಾಂಶದ ಸಮಾಲೋಚನೆ, ಮಾನಸಿಕ ಸಮಾಲೋಚನೆ, ವಿಶೇಷ ಪಂಚ ಕರ್ಮ ಚಿಕಿತ್ಸೆ , ಮಧುಮೇಹ, ಅಧಿಕ ರಕ್ತದೊತ್ತಡ, ನಿದ್ರಾಹೀನತೆ ಸೇರಿ ಚರ್ಮಕ್ಕೆ ಸಂಭದಿಸಿದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here