ಮಂಗಳೂರು: ಶ್ರೀ ರಾಧಾ ಸುರಭಿ ಗೋ ಮಂದಿರ , ರಾಷ್ಟ್ರೀಯ ಗೋ ಸೇವಾ ಸಂಸ್ಥಾನ,ಗೋ ಸೇವಾ ಗತಿವಿಧಿ ಕರ್ನಾಟಕ ಇದರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಧರ್ಮಾಧಾರಿತ ವಿಶ್ವಗುರು ಭಾರತಕ್ಕಾಗಿ ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ, ಸಪ್ತಾಹ ಮಹಾಯಜ್ಞ, 1108 ನಾರಾಯಣ ಕವಚ ಯಾಗ ಹಾಗೂ ಗೋ ನವರಾತ್ರಿ ಉತ್ಸವ ವನ್ನು ಆಯೋಜಿಸಲಾಗಿದ್ದು, ಆ ಪ್ರಯುಕ್ತ (31-10-2023) ಶ್ರೀ ಮಂಗಳಾದೇವಿ ದೇವಸ್ಥಾನದ ಶ್ರೀ ಮಂಗಳಾದೇವಿ ಕಲಾ ಮಂಟಪದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.



ಆಮಂತ್ರಣ ಪತ್ರಿಕೆಯನ್ನು ವಿಶ್ವ ಹಿಂದೂ ಪರಿಷತ್ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಎಂ ಬಿ ಪುರಾಣಿಕ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಭಕ್ತಿ ಭೂಷಣದಾಸ ಪ್ರಭೂಜಿ, ಕ್ಯಾಪ್ಟನ್ ಬೃಜೇಶ್ ಚೌಟ, ಮಾಲಾಡಿ ಅಜಿತ್ ಕುಮಾರ್ ರೈ, ಶರಣ್ ಪಂಪ್ವೆಲ್, ಸುನಿಲ್ ಆಚಾರ್, ರಂಜನ್ ಬೆಳ್ಳಾರ್ಪಾಡಿ, ಪ್ರವೀಣ ಸರಳಾಯ, ಹೆಚ್. ಕೆ. ಪುರುಷೋತ್ತಮ, ತಾರಾನಾಥ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.
