Home ತಾಜಾ ಸುದ್ದಿ ಕೇರಳದಲ್ಲಿ ಸರಣಿ ಸ್ಪೋಟ : ಅಮಿತ್ ಶಾ ಸೂಚನೆ ಮೇರೆಗೆ ಕೇರಳಕ್ಕೆ ತೆರಳಿದ NIA ತಂಡ

ಕೇರಳದಲ್ಲಿ ಸರಣಿ ಸ್ಪೋಟ : ಅಮಿತ್ ಶಾ ಸೂಚನೆ ಮೇರೆಗೆ ಕೇರಳಕ್ಕೆ ತೆರಳಿದ NIA ತಂಡ

0

ಕೇರಳ : ಕೇರಳದ ಎರ್ನಾಕುಲಂ ನ ಕ್ರಿಶ್ಚಿಯನ್ ಸಮುದಾಯದ ಕನ್ವೆನ್ಷನ್ ಹಾಲ್ ನಲ್ಲಿ ಟಾರ್ಗೆಟ್ ಮಾಡಿ ಸರಣಿ ಬ್ಲಾಸ್ಟ್ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸಚಿವ ಅಮಿತ್ ಶಾ ಅವರ ಸೂಚನೆ ಮೇರೆಗೆ ನಾಲ್ವರು ಸದಸ್ಯರನ್ನು ಒಳಗೊಂಡ ಎನ್‌ಐಎ ಅಧಿಕಾರಿಗಳ ತಂಡ ಇದೀಗ ಕೇರಳಕ್ಕೆ ತೆರಳಿದೆ.

 

ಎರ್ನಾಕುಲಂಗೆ ತೆರಳಿದ ಎನ್‌ಐಎ ನಾಲ್ವರು ಸದಸ್ಯರ ತಂಡ. ಕೇಂದ್ರ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಎನ್‌ಐಎ ತಂಡ ಇದೀಗ ಕೇರಳಕ್ಕೆ ತೆರಳಿದೆ. ಕೊಚ್ಚಿಯಿಂದ NIA ಅಧಿಕಾರಿಗಳ ತಂಡ ಎರ್ನಾಕುಲಂಗೆ ತೆರಳಿದೆ.ಸ್ಫೋಟದ ಕುರಿತು ಎನ್‌ಐಎ ಅಧಿಕಾರಿಗಳ ತಂಡ ತನಿಖೆ ನಡೆಸಲಿದೆ.

ಈ ಕನ್ವೆನ್ಷನ್ ಹಾಲ್ ನಲ್ಲಿ ಭಕ್ತರು ಮೂರು ದಿನಗಳಿಂದ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಇಂದು ಕೊನೆಯ ದಿನದ ಪ್ರಾರ್ಥನೆಗೆಂದು ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ವೇಳೆ ಸರಣಿ ಸ್ಫೋಟಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಎರ್ನಾಕುಲಮ್ನ ಕಲಮಸೇರಿ ಕನ್ವೆನ್ಷನ್ ಹಾಲ್ನಲ್ಲಿ ತೀವ್ರವಾದ ಸ್ಪೋಟ ಸಂಭವಿಸಿದೆ.ಕೇಂದ್ರ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಇದೀಗ ಎನ್‌ಐಎ ತಂಡ ಸ್ಥಳ ಪರಿಶೀಲನೆ ನಡೆಸಲು ಕೇರಳಕ್ಕೆ ತೆರಳಿದೆ. ಸ್ಪೋಟದಲ್ಲಿ ಗಾಯಗೊಂಡವರನ್ನು ಎರ್ನಾಕುಲಂ ಹಾಗೂ ಕೊಟ್ಟ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ದೊಡ್ಡದಾದ ಅನಾಹುತ ಒಂದು ತಪ್ಪಿದೆ.

LEAVE A REPLY

Please enter your comment!
Please enter your name here