Home ತಾಜಾ ಸುದ್ದಿ ಮೆಕ್ಕಾದಲ್ಲಿ ಭಾರತ್​ ಜೋಡೋ ಫೋಸ್ಟರ್ ತೋರಿಸಿದ್ದಕ್ಕೆ 99 ಛಡಿ ಏಟು, 8 ತಿಂಗಳು ಜೈಲು ಶಿಕ್ಷೆ

ಮೆಕ್ಕಾದಲ್ಲಿ ಭಾರತ್​ ಜೋಡೋ ಫೋಸ್ಟರ್ ತೋರಿಸಿದ್ದಕ್ಕೆ 99 ಛಡಿ ಏಟು, 8 ತಿಂಗಳು ಜೈಲು ಶಿಕ್ಷೆ

0
ವದೆಹಲಿ: ಸೌದಿ ಅರೆಬಿಯಾದ ಪವಿತ್ರಾ ನಗರ ಮೆಕ್ಕಾದಲ್ಲಿರುವ ಕಅಬಾ ಎದುರು ನಿಯಮ ಉಲ್ಲಂಘಿಸಿ ಭಾರತ್​ ಜೋಡೋ ಯಾತ್ರೆಯ  ಫಲಕ ಪ್ರದರ್ಶಿಸಿ ಜೈಲು ಪಾಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತ  ರಾಝಾ ಖಾದ್ರಿ ಎಂಟು ತಿಂಗಳ ಜೈಲು ಶಿಕ್ಷೆಯ ಬಳಿಕ ಬಿಡುಗಡೆಯಾಗಿ ಭಾರತಕ್ಕೆ ಮರಳಿದ್ದಾರೆ.

ಮಧ್ಯಪ್ರದೇಶದ ಝಾನ್ಸಿ ಜಿಲ್ಲೆಯ ನಿವಾಸಿ ಖಾದ್ರಿ ಎಂಬಾತನ್ನ ಸೌದಿ ಪೊಲೀಸರು ಬಂಧಿಸಿದ್ದರು. ಇದೀಗ ಜೈಲಿನಲ್ಲಿ ತಾವು ಅನುಭವಿಸಿದ ಯಾತನೆಯನ್ನ ಕಾಂಗ್ರೆಸ್ ಕಾರ್ಯಕರ್ತ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಕನ್ಯಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಅರಂಭಿಸಿದ್ದರು. ಈ ವೇಳೆ ಅವರನ್ನು ಬೆಂಬಲಿಸುವ ಸಲುವಾಗಿ ಭಾರತ್​ ಜೋಡೋ ಯಾತ್ರೆಯ ಫಲಕವನ್ನು ಕಅಭಾದಲ್ಲಿ ತೋರಿಸಿ ಫೋಟೋವನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಆದರೆ ಎರಡು ದಿನಗಳ ಆತ ತಂಗಿದ್ದ ಹೋಟೆಲ್ ನಲ್ಲಿ ಅವರನ್ನು ಸೌದಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು.ಇಸ್ಲಾಮಿಕ್ ಪವಿತ್ರ ಸ್ಥಳಗಳು ಸೇರಿದಂತೆ ಸೌದಿ ಅರೇಬಿಯಾದಲ್ಲಿ ಯಾವುದೇ ರೀತಿಯ ಧ್ವಜ ಮತ್ತು ಫಲಕವನ್ನು ಪ್ರದರ್ಶಿಸುವುದು ಕಾನೂನುಬಾಹಿರವಾಗಿದ್ದರಿಂದ ಅವರನ್ನು ಬಂಧಿಸಲಾಗಿತ್ತು.

ಭಾರತ್ ಜೋಡೋ ಯಾತ್ರೆಯ ಪೋಸ್ಟರ್ ಅನ್ನು ಪ್ರದರ್ಶಿಸಿಸಿ ಸೌದಿ ಅರೇಬಿಯಾದ ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ರಾಝಾರನ್ನ ಬಂಧಿಸಲಾಗಿತ್ತು. 2 ತಿಂಗಳ ಕಾಲ ಎರಡು ತಿಂಗಳ ವಿಚಾರಣೆ ನಡೆಸಿದ್ದ ಪೊಲೀಸರು ಶಿಕ್ಷೆಯಾಗಿ 99 ಛಡಿ ಏಟು ಹೊಡೆದಿದ್ದರು ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಪೋಸ್ಟರ್ ತೋರಿಸಿದ್ದಕ್ಕಾಗಿ ಮಧ್ಯಪ್ರದೇಶದ ವ್ಯಕ್ತಿಯನ್ನು ಸೌದಿ ಅರೇಬಿಯಾ ಪೊಲೀಸರು ಜೈಲಿಗೆ ಹಾಕಿದ್ದರು. ಅವರನ್ನು 8 ತಿಂಗಳ ಕಾಲ ಬಂಧಿಸಿ, ಬೆಳಿಗ್ಗೆ ಮತ್ತು ಸಂಜೆ ಕೇವಲ ಎರಡು ಬ್ರೆಡ್ ಮಾತ್ರ ನೀಡುತ್ತಿದ್ದರು. ರಾತ್ರಿಯಿಡೀ ಮಲಗಲು ಬಿಡುತ್ತಿರಲಿಲ್ಲ. ಭಾರತೀಯ ರಾಯಭಾರಿ ಕಚೇರಿ ಕೂಡ ಅವರಿಗೆ ಸಹಾಯ ಮಾಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಕುಟುಂಬದ ಎಲ್ಲಾ ಪ್ರಯತ್ನಗಳ ನಂತರ, ಅವರು ಅಂತಿಮವಾಗಿ ಅಕ್ಟೋಬರ್ 4 ರಂದು ತಮ್ಮ ದೇಶಕ್ಕೆ ಮರಳಿದ್ದಾರೆ.

ಯುವ ಕಾಂಗ್ರೆಸ್ ಅಧ್ಯಕ್ಷ ರಜಾ ಖಾದ್ರಿ ತಮ್ಮ ಅಜ್ಜಿ ಶಹೀದಾ ಬೇಗಂ ಅವರೊಂದಿಗೆ ಜನವರಿ 21 ರಂದು ಹಜ್‌ಗೆ ತೆರಳಿದ್ದರು. ಜನವರಿ 25 ರಂದು, ಮೆಕ್ಕಾದ ಹರಾಮ್ ಮಸೀದಿಯಿಂದ ಭಾರತ್ ಜೋಡೋ ಯಾತ್ರೆಯ ಪೋಸ್ಟರ್ನೊಂದಿಗೆ ರಾಝಾ ಫೋಟೋ ಕ್ಲಿಕ್ಕಿಸಿದ್ದರು. ಇದಾದ ನಂತರ ಆತನನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು.ತನ್ನನ್ನು ರಾಜಕೀಯ ಏಜೆಂಟ್ ಎಂದು ಬಂಧಿಸಿದ್ದರು. ಸುಮಾರು 2 ತಿಂಗಳ ಕಾಲ ನನ್ನನ್ನು ವಿಚಾರಣೆ ನಡೆಸಿದರು. ತಾವೂ ಇಲ್ಲಿ ಕಾಂಗ್ರೆಸ್​ ರ್ಯಾಲಿಯಲ್ಲಿ ಭಾಗವಹಿಸಿದ್ದ ವಿಡಿಯೋಗಳನ್ನು ತರಿಸಿಕೊಂಡ ಅವರು ನನ್ನನ್ನು ರಾಜಕೀಯ ಏಜೆಂಟ್ ಎಂದು ಭಾವಿಸಿದರು. ವಿಡಿಯೋ ಸಿಕ್ಕಿದ ಮೇಲೆ ನನ್ನ ಮೇಲೆ ಅನುಮಾನ ಜಾಸ್ತಿಯಾಯಿತು. ನಂತರ ನನ್ನನ್ನು ದಹಬಾನ್‌ನ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಇಲ್ಲಿ ನಾನು ಎರಡು ತಿಂಗಳು ಕತ್ತಲೆ ಕೋಣೆಯಲ್ಲಿ ಕಳೆದಿದ್ದೆ. ಊಟವಾಗಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಬ್ರೆಡ್ ತುಂಡುಗಳನ್ನು ನನಗೆ ಕೊಡುತ್ತಿದ್ದರು ಎಂದು ಖಾದ್ರಿ ನರಕಯಾತನೆಯನ್ನು ಹೇಳಿಕೊಂಡಿದ್ದಾರೆ.

ಪ್ರಕರಣದ ತನಿಖೆ ನಂತರ ಪೊಲೀಸರಿಗೆ ನನ್ನ ಮೇಲೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಗುಪ್ತಚರ ಇಲಾಖೆಗೆ ಬಂದಿದ್ದ ವಿಡಿಯೋಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅವರು ಸೌದಿ ಅರೇಬಿಯಾಕ್ಕೆ ಯಾವುದೇ ಬೆದರಿಕೆಯನ್ನು ಇಲ್ಲ ಎಂಬುದು ಸಾಬೀತಾದ ನಂತರ ಬಿಡುಗಡೆ ಮಾಡಲಾಯಿತು. ಸೌದಿ ಪೊಲೀಸರು ಅಕ್ಟೋಬರ್ 3 ರಂದು ರಾಝಾ ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟರು ಎಂದು ತಿಳಿಸಿದ್ದಾರೆ.

ನನ್ನನ್ನು ವಾಪಸ್ ಕರೆತರಲು ಕುಟುಂಬ 28 ಲಕ್ಷ ರೂಪಾಯಿ ಖರ್ಚು ಮಾಡಿದೆ. ವಂಚನೆಯಿಂದ ಬಹಳಷ್ಟು ಹಣ ಹೋಗಿದೆ. ನನ್ನನ್ನು ಬಿಡಿಸುವ ಹೆಸರಿನಲ್ಲಿ ಅನೇಕರು ನನ್ನ ಕುಟುಂಬದಿಂದ ಹಣ ವಸೂಲಿ ಮಾಡಿದ್ದಾರೆ. ಸೌದಿಯಲ್ಲಿನ ನಮ್ಮ ಭಾರತೀಯ ರಾಯಭಾರ ಕಚೇರಿ ಸಂಪೂರ್ಣವಾಗಿ ಸತ್ತಿದೆ.

ನಾನು ಜೈಲಿನಿಂದ ಹೊರಬಂದಾಗ ನನ್ನ ಬಳಿ ಪಾಸ್‌ಪೋರ್ಟ್ ಇರಲಿಲ್ಲ. ನಾನು ರಾಯಭಾರ ಕಚೇರಿಯಿಂದ ಸಹಾಯ ಕೇಳಿದಾಗ, ರಾಯಭಾರಿ ಕಚೇರಿಯ ತನ್ವೀರ್ ಆಲಂ ಅವರು ನನಗೆ ಪಾಸ್‌ಪೋರ್ಟ್ ಕೆಲಸಕ್ಕಾಗಿ 1200 ರಿಯಾಲ್ (ಸುಮಾರು 26 ಸಾವಿರ ರೂಪಾಯಿ) ಪಡೆದುಕೊಂಡರು. ನನ್ನಂತೆ ಸಾವಿರಾರು ಭಾರತೀಯರು ಅಲ್ಲಿ ಸಿಲುಕಿಕೊಂಡಿದ್ದಾರೆ. ಅವನ ಸ್ಥಿತಿ ನನಗಿಂತ ಕೆಟ್ಟದಾಗಿದೆ. ಇವರಲ್ಲಿ ಹಲವರು ತಮ್ಮದೇ ಏಜೆಂಟರಿಂದಲೇ ಮೋಸ ಹೋಗಿದ್ದಾರೆ. ಅವರನ್ನು ಹೊರತರಲು ರಾಯಭಾರಿ ಕಚೇರಿಯ ಜನರು ಹಣಕ್ಕೆ ಬೇಡಿಕೆ ಇಡುತ್ತಾರೆ. ಪಾವತಿಸಲು ಸಾಧ್ಯವಿರುವವರ ಹಣವನ್ನು ಸಾಕಷ್ಟು ಹಣವನ್ನು ಪೀಕುತ್ತಾರೆ ಎಂದು ನೋವನ್ನು ತೋಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here