Home ಕರಾವಳಿ ಸುಳ್ಯ: ಬಸ್ ಚಾಲನೆ ವೇಳೆ ಎದೆನೋವು- ನಿರ್ವಾಹಕ ಮೃತ್ಯು

ಸುಳ್ಯ: ಬಸ್ ಚಾಲನೆ ವೇಳೆ ಎದೆನೋವು- ನಿರ್ವಾಹಕ ಮೃತ್ಯು

0

 ಸುಳ್ಯ  (ಅರಂತೋಡು): ಸುಳ್ಯ ತೊಡಿಕಾನ ಅವಿನಾಶ್ ಎಂಬ ಖಾಸಗಿ ಬಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಸೋಮವಾರ (ಅ.14) ಬೆಳಿಗ್ಗೆ ಚಲಾವಣೆ ವೇಳಯೇ ಸಾವನ್ನಪ್ಪಿದ ದಾರುಳ ಘಟನೆ ನಡೆದಿದೆ.

ಗುರು ಪ್ರಸಾದ್ ಕುಂಚಡ್ಕ (30) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ದುರಾದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅರಂಬೂರು ಬಳಿ ಅಟೋ ರಿಕ್ಷಾದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

 

LEAVE A REPLY

Please enter your comment!
Please enter your name here